ಪುಸ್ತಕದ ಮುಖಬೆಲೆ - 250 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 210 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ಮೋಹನದಾಸ ಕರಮಚಂದ ಗಾಂಧಿ ಮಹಾತ್ಮ ಗಾಂಧಿಯಾಗುವುದಕ್ಕೂ ಮೊದಲು ಹೇಗಿದ್ದರು, ಅವರು ಕಾನೂನು ಅಧ್ಯಯನ ನಡೆಸಿದ್ದು ಹೇಗೆ, ಕಾನೂನು ಅಧ್ಯಯನ ಪೂರ್ಣಗೊಳಿಸಿದ ನಂತರ ಗಾಂಧಿಯ ಬದುಕು ಹೇಗಿತ್ತು, ವಕೀಲರಾದ ನಂತರ ಅವರು ಯಶಸ್ವಿ ವಕೀಲರಾದರೆ ಅಥವಾ ಅವರು ನಡೆಸುತ್ತಿದ್ದ ಕೇಸುಗಳಲ್ಲಿ ಸೋಲಾಯಿತೇ, ದಕ್ಷಿಣ ಆಫ್ರಿಕಾಕ್ಕೆ ಗಾಂಧಿ ಹೋಗಲು ಇದ್ದ ಕಾರಣವೇನು, ಅಲ್ಲಿ ಅವರು ವಕೀಲರಾಗಿ ಏನೆಲ್ಲ ಕಷ್ಟಗಳನ್ನು ಎದುರಿಸಬೇಕಾಯಿತು, ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅವರಲ್ಲೊಬ್ಬ ಹೋರಾಟಗಾರ ಹುಟ್ಟಿದ್ದು ಹೇಗೆ... ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಿದ ಕನ್ನಡ ಪುಸ್ತಕಗಳು ತೀರಾ ಕಡಿಮೆ. ಈ ಕೊರತೆಯನ್ನು ನೀಗಲಿಕ್ಕೆಂದೇ ಓ.ಆರ್. ಪ್ರಕಾಶ್ ಅವರು ’ನಾವು ಕಂಡೂ ಕಾಣದ ಗಾಂಧಿ’ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಗಾಂಧಿಯ ವಕೀಲಿಕೆಯ ದಿನಗಳ ಸಂಪೂರ್ಣ ವಿವರವಿದೆ, ಜೊತೆಗೆ ಆ ದಿನಗಳ ಚಿತ್ರಗಳೂ ಇವೆ. ಪುಸ್ತಕಕ್ಕೆ ಸರ್ವೋದಯ ಕಾರ್ಯಕರ್ತರಾದ ಎಲ್. ನರಸಿಂಹಯ್ಯನವರು ಅರ್ಥಪೂರ್ಣ ಬೆನ್ನುಡಿ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲೆ ಕೋಡೂರು ಯಳಗಲ್ಲಿನ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.