ಪುಸ್ತಕದ ಮುಖಬೆಲೆ - 130 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 110 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
’ಸೆರಗಿನೊಳಗಣ ಕೆಂಡ ಮತ್ತು ಇತ ಕತೆಗಳು’ ಕಥೆಗಾರ್ತಿ ಗೌರಿ ಚಂದ್ರಕೇಸರಿ ಅವರ ಚೊಚ್ಚಲ ಕಥಾಸಂಕಲನ. ಕನ್ನಡದ ಪ್ರತಿಷ್ಠಿತ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಗೌರಿ ಚಂದ್ರಕೇಸರಿ ಅವರ ಪಟ್ಟು 15 ಕಥೆಗಳು ಈ ಸಂಕಲನದಲ್ಲಿವೆ. ಪ್ರತಿಯೊಂದು ಕಥೆಗಳೂ ನಮ್ಮ ನಡುವಿನ ಯಾರದ್ದೋ ಒಬ್ಬರ ಬದುಕಿನ ಪುಟಗಳೇನೋ ಎನ್ನುವಷ್ಟು ಕಥೆಗಳು ಸಹಜವಾಗಿವೆ, ಓದಿ ಮುಗಿಸಿದ ನಂತರ ಕಾಡುತ್ತವೆ. ಸಂಕಲನಕ್ಕೆ ಕಥೆಗಾರ್ತಿ ಅರ್ಪಣಾ ಹೆಚ್.ಎಸ್ ಅವರ ಮುನ್ನುಡಿ ಇದೆ ಮತ್ತು ಲೇಖಕರು-ಅನುವಾದಕರೂ ಆದ ನಾಗ ಹೆಚ್. ಹುಬ್ಳಿ ಅವರ ಬೆನ್ನುಡಿ ಇದೆ. ಈ ಕಥಾಸಂಕಲನ ವಿದ್ಯಾಧರ ಕನ್ನಡ ಪ್ರತಿಷ್ಠಾನ ಮುಂಬಯಿ-ಧಾರವಾಡ ಇವರು ಆಯೋಜಿಸಿದ್ದ 2022ರ ಡಾ. ದ.ರಾ.ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ ಚೊಚ್ಚಲ ಸಾಹಿತ್ಯ ಸಂಕಲನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಶಿವಮೊಗ್ಗ ಜಿಲ್ಲೆ ಕೋಡೂರು ಯಳಗಲ್ಲಿನ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.