ಪುಸ್ತಕದ ಮುಖಬೆಲೆ - 70 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 60 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ. ಕನ್ನಡದಲ್ಲಿ ಆಯುರ್ವೇದ ವೈದ್ಯ ಪದ್ಧತಿ ಬಗ್ಗೆ ಬರೆದು, ಸಾಮಾನ್ಯ ಓದುಗರಿಗೂ ಸರಳ ಶೈಲಿಯಿಂದ ಆಯುರ್ವೇದ ವೈದ್ಯ ಪದ್ಧತಿಯನ್ನು ಪರಿಚಯಿಸಿದ ಆಯುರ್ವೇದ ವೈದ್ಯೆ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಬರೆದ ಪುಸ್ತಕ ’ತರಕಾರಿಗಳಲ್ಲಡಗಿದೆ ಔಷಧ’. ತರಕಾರಿಗಳಲ್ಲಡಗಿರುವ ಔಷಧೀಯ ಗುಣಗಳನ್ನು ಸರಳವಾಗಿ ವಿವರಿಸಿರುವ ಈ ಪುಸ್ತಕ ಅಗತ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲೂ ಇರಬೇಕಾದುದಾಗಿದೆ.
ಶಿವಮೊಗ್ಗ ಜಿಲ್ಲೆ ಕೋಡೂರಿನ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ (ರಿ) (ಆರುಡೋ) ಈ ಪುಸ್ತಕವನ್ನು ಪ್ರಕಟಿಸಿದೆ.