ಮೂರು ಪುಸ್ತಕಗಳ ಒಟ್ಟು ಮುಖಬೆಲೆ - 340 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 250 ರೂಪಾಯಿಗೆ ಈ ಪುಸ್ತಕಗಳ ಪ್ಯಾಕೇಜ್ನ್ನು ಮಾರಾಟಕ್ಕಿಡಲಾಗಿದೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ನಾರಾಯಣ ಬಾಬಾನಗರ ಅವರು ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಬದುಕಿನ ವಿವಿಧ ಹಂತಗಳಲ್ಲಿ ಕಂಡುಂಡ ಅನುಭವಗಳನ್ನು ಆಪ್ತ ಶೈಲಿಯಲ್ಲಿ ದಾಖಲಿಸುತ್ತಾ ಹೋಗಿರುವ ಅಪರೂಪದ ಬರಹಗಳ ಸಂಕಲನ ’ಗುಬ್ಬಿಗೂಡು’, ’ನೆರಳಿನ್ಹಾಂಗ ನೆನಪು’ ಮತ್ತು ’ಬದುಕಿನ ದೋಣಿಯಲಿ...’ ಈ ಮೂರೂ ಪುಸ್ತಕಗಳ ಓದು ನಿಮ್ಮ ಓದುವ ಪ್ರೀತಿಗೆ ಇನ್ನಷ್ಟು ಹುರುಪು ತುಂಬಬಲ್ಲದು. ಆದ್ದರಿಂದಲೇ ನಮ್ಮ ಆನ್ಲೈನ್ ತಾಣದಲ್ಲಿ ಈ ಮೂರು ಪುಸ್ತಕಗಳ ಪ್ಯಾಕೇಜ್ನ್ನು ಈಗ ವಿಶೇಷ ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ.
ಈ ಮೂರೂ ಪುಸ್ತಕಗಳನ್ನೂ ಶಿವಮೊಗ್ಗ ಜಿಲ್ಲೆ ಕೋಡೂರಿನ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.