ಪುಸ್ತಕದ ಮುಖಬೆಲೆ - 75 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 65 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
'ಕೋಟೆಗಳು ಉರುಳಿ' ಕನ್ನಡದಲ್ಲಿ ಬರೆದ ಮತ್ತು ಭಾರತದ ಮಹತ್ವದ ಬರಹಗಾರರಾದ; ವಿರುದ್ಧ ಧ್ರುವಗಳೆಂದು ಪರಿಗಣಿತವಾಗಿರುವ ಯು.ಆರ್ ಅನಂತಮೂರ್ತಿ ಹಾಗೂ ಎಸ್.ಎಲ್ ಭೈರಪ್ಪನವರ ಆತ್ಮಕಥನಗಳಾದ 'ಸುರಗಿ' ಮತ್ತು 'ಭಿತ್ತಿ'ಗಳ ತೌಲನಿಕ ಅಧ್ಯಯನ. ಈ ಪ್ರಯತ್ನ "ಭೈರಪ್ಪ ಮತ್ತು ಅನಂತಮೂರ್ತಿ ಹೀಗೆ ಈಗ ಇಬ್ಬರನ್ನೂ ಅಕ್ಕ-ಪಕ್ಕಕ್ಕೆ ಒಂದು ಕ್ಷಣ ಕೂರಿಸಿದರೂ ಸಾಕು. ಅವರಿಬ್ಬರೂ ಬರೆದ ಅಷ್ಟೂ ಪುಸ್ತಕಗಳನ್ನೂ ಒಟ್ಟಿಗೆ ಇಟ್ಟರೂ ಸಾಕು. ಅವರಾಡಿದ ಮಾತುಗಳನ್ನೆಲ್ಲ ಒಟ್ಟಾಗಿಟ್ಟು ಮಾತನಾಡಿಸಿದರೂ ಸಾಕು. ಮುಂದೆ ಇವುಗಳೆಲ್ಲ ಜಗಳವಾಡಲಿ, ಕಿತ್ತಾಡಲಿ, ಗುದ್ದಾಡಲಿ ಅಡ್ಡಿಯಿಲ್ಲ. ಇಷ್ಟು ಸಾಧ್ಯವಾದರೆ ಇನ್ನೂ ಏನೇನೋ ಸಾಧ್ಯವಾಗಬಹುದು" ಎನ್ನುವ ಆಶಯದ್ದು.ಈ ಪುಸ್ತಕದಲ್ಲಿ ಭೈರಪ್ಪನವರ ಆಪ್ತರಾದ ಪ್ರೊ. ಪ್ರಧಾನ ಗುರುದತ್ತ್ ಹಾಗೂ ಅನಂತಮೂರ್ತಿ ಅವರನ್ನು ಚೆನ್ನಾಗಿ ಬಲ್ಲ ಪ್ರೊ. ಸಿ. ನಾಗಣ್ಣನವರ ಪರಿಶೀಲನೆ ಮತ್ತು ಬರಹಗಳಿವೆ.
ಧಾರವಾಡ ಸಪ್ತಾಪುರದ ಸತ್ವ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.