ಪುಸ್ತಕದ ಮುಖಬೆಲೆ - 95 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 85 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ಕಥೆಗಾರರಾಗಿ, ಲೇಖಕರಾಗಿ ಗುರುತಿಸಿಕೊಂಡಿರುವ ಡಾ.ಸರ್ಜಾಶಂಕರ್ ಹರಳೀಮಠ ಅವರು ಬರೆದ ವೈಚಾರಿಕ ಲೇಖನಗಳ ಸಂಕಲನ ’ಸುಡುಹಗಲ ಸೊಲ್ಲು’. ಲೇಖಕರೇ ಹೇಳಿರುವಂತೆ ಆ ಕ್ಷಣಕ್ಕೆ ತೋರಿದ ಪ್ರತಿಕ್ರಿಯೆಗಳೇ ಇಲ್ಲಿನ ಲೇಖನಗಳಾಗಿವೆ. ಪ್ರಜಾವಾಣಿಯ ’ಸಂಗತ’, ’ಗೌರಿ ಲಂಕೇಶ್’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕೆಲವು ವಿಚಾರಸಂಕಿರಣಗಳಲ್ಲಿ ಮಾಡಿದ ಭಾಷಣಗಳ ಬರಹದ ರೂಪಗಳು ಈ ಸಂಕಲನದಲ್ಲಿದೆ. ಈ ಪುಸ್ತಕಕ್ಕೆ ನಟರಾಜ್ ಹುಳಿಯಾರ್ ಅವರು ಬೆನ್ನುಡಿ ಬರೆದಿದ್ದಾರೆ.
ಶಿವಮೊಗ್ಗದ ಅಂತಃಕರಣ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.