ನಾಲ್ಕು ಪುಸ್ತಕಗಳ ಒಟ್ಟು ಮುಖಬೆಲೆ - 300 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 240 ರೂಪಾಯಿಗೆ ಈ ಪುಸ್ತಕಗಳ ಪ್ಯಾಕೇಜ್ನ್ನು ಮಾರಾಟಕ್ಕಿಡಲಾಗಿದೆ.
ತಮ್ಮ ಆಪ್ತ ಬರಹಗಳಿಂದ ಓದುಗರ ಮನಗೆದ್ದ ಕನ್ನಡದ ಕೆಲವೇ ಕೆಲವು ಲೇಖಕಿಯರಲ್ಲಿ ಎನ್.ಆರ್.ರೂಪಶ್ರೀ ಶಿರಸಿ ಅವರೂ ಒಬ್ಬರು. ಗದ್ಯ ಮತ್ತು ಪದ್ಯ ಎರಡೂ ಪ್ರಕಾರಗಳಲ್ಲಿ ತಮ್ಮದೇ ಆಪ್ತ ಶೈಲಿಯನ್ನು ರೂಢಿಸಿಕೊಂಡು ಗೆದ್ದಿರುವ ಎನ್.ಆರ್.ರೂಪಶ್ರೀ ಶಿರಸಿ ಅವರು ಬರೆದಿರುವ ’ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು...’, ’ಹೆಜ್ಜೆಯಲ್ಲಿ ಗೆಜ್ಜೆನಾದ’, ’ನಿನ್ನ ಪ್ರೀತಿಯ ನೆರಳಿನಲ್ಲಿ...’ ಹಾಗೂ ’ಕನಸ ತುಂಬಿದ ಕವಿತೆ (ಕವನ ಸಂಕಲನ)’ ಪುಸ್ತಕಗಳು ನಿಮ್ಮ ಓದಿನ ಖುಷಿಗೆ ಇನ್ನಷ್ಟು ಹೊಸ ಖುಷಿಯನ್ನು ಸೇರಿಸಬಲ್ಲದು. ನಮ್ಮ ಆನ್ಲೈನ್ ತಾಣದಲ್ಲಿ ಈ 4 ಪುಸ್ತಕಗಳ ಪ್ಯಾಕೇಜ್ನ್ನು ಈಗ ವಿಶೇಷ ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ.
ಈ 4 ಪುಸ್ತಕಗಳನ್ನೂ ಶಿವಮೊಗ್ಗ ಜಿಲ್ಲೆ ಕೋಡೂರಿನ ಬೆನಕ ಬುಕ್ಸ್ ಬ್ಯಾಂಕ್ ಹಾಗೂ ಬೆಂಗಳೂರಿನ ಆವಿ ಪುಸ್ತಕ ಮನೆ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿವೆ.