ಪುಸ್ತಕದ ಮುಖಬೆಲೆ - 300 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 270 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ದಾಸಸಾಹಿತ್ಯದ ಕುರಿತು ಈಗಾಗಲೇ ’ತಂಬೂರಿ ಮೀಟಿದವ’, ’ಮಣ್ಣಿಂದ ಕಾಯ’ ಮುಂತಾದ ಕೃತಿಗಳನ್ನು ಬರೆದಿರುವ ಪ್ರೊ. ಹೆಚ್.ಎನ್. ಮುರುಳೀಧರ ಅವರು ವಚನಗಳ ಕುರಿತು ಬರೆದಿರುವ ಪುಸ್ತಕ ’ಅನಿಯಮ’. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭು ಸೇರಿದಂತೆ ಹಲವು ವಚನಕಾರರ ವಚನಗಳಿಗೆ ಲೇಖಕರು ಇಲ್ಲಿ ಅರ್ಥನಿರೂಪಣೆ ಮಾಡಿದ್ದಾರೆ. ಲಕ್ಷ್ಮೀಶ ತೋಳ್ಪಾಡಿ ಅವರ ಬೆನ್ನುಡಿ ಈ ಪುಸ್ತಕಕ್ಕಿದೆ.
ಬೆಂಗಳೂರು ಚಿಕ್ಕನಹಳ್ಳಿಯ ಪರಸ್ಪರ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.