ಪುಸ್ತಕದ ಮುಖಬೆಲೆ - 50 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 45 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ಎಲ್ಲರೂ ದೇಶದ ಸಂವಿಧಾನವನ್ನು ಓದಬೇಕು, ಅರ್ಥೈಸಿಕೊಳ್ಳಬೇಕು, ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ಜೊತೆಗೆ ಸಂವಿಧಾನದ ಪ್ರತಿಯೊಂದು ಆಶಯಗಳನ್ನೂ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಲೇ, ಪ್ರಸ್ತುತ ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು ಎನ್ನುವ ಆಶಯದೊಂದಿಗೆ ವಿದ್ಯಾರ್ಥಿ ಯುವಜನರಿಗೆಂದು ನ್ಯಾಯಮೂರ್ತಿಗಳಾದ ಹೆಚ್.ಎನ್.ನಾಗಮೋಹನ ದಾಸ್ ಅವರು ರೂಪಿಸಿರುವ ಕೈಪಿಡಿಯೇ ’ಸಂವಿಧಾನ ಓದು’. ಯುವಜನರು ದೇಶವನ್ನು, ದೇಶದ ಸಂವಿಧಾನವನ್ನು ಅರಿಯಲು ಈ ಕೃತಿಯನ್ನು ಓದಲೇಬೇಕು.
ಕೆರೆಕೋಣದ ಸಹಯಾನ ಹಾಗೂ ಬೆಂಗಳೂರಿನ ಸಮುದಾಯ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ