ಪುಸ್ತಕದ ಮುಖಬೆಲೆ - 120 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 105 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ನಮ್ಮ ದೇಶದಲ್ಲಿ ನುಡಿಗಳನ್ನು ಆಧರಿಸಿ ಪ್ರಾಂತ್ಯಗಳನ್ನು ಮರುರೂಪಿಸುವ ವಿಧಾನವು ಲಭ್ಯವಿದ್ದ ಸಾಧ್ಯತೆಗಳಲ್ಲಿ ಕಡಿಮೆ ಅಪಾಯಕಾರಿಯಾದದ್ದು ಎನ್ನುವುದೇ ಅಂಬೇಡ್ಕರ್ ಅವರ ನಿಲುವಾಗಿತ್ತು. ಆರು ದಶಕಗಳು ಕಳೆದ ಬಳಿಕ ಈಗ ನೋಡಿದರೆ ಅಂಬೇಡ್ಕರ್ ಅವರು ಮುಂಗಡಿದ್ದ ಅಪಾಯಗಳು ಮುಂಚೂಣಿಗೆ ಬಂದಿರುವುದನ್ನು ನಾವು ಕಾಣಬಹುದಾಗಿದ್ದು ಈ ಹಿನ್ನೆಲೆಯಲ್ಲಿ ಮೇಟಿ ಮಲ್ಲಿಕಾರ್ಜುನ ಅವರು ಅಂಬೇಡ್ಕರ್ ಅವರ ಭಾಷಿಕ ಚಿಂತನೆಗಳನ್ನು ಆಧರಿಸಿ ಬರೆದಿರುವ ಪುಸ್ತಕ ’ಭಾರತದ ಭಾಷಿಕ ಸನ್ನಿವೇಶ’.
ಬೆಂಗಳೂರಿನ ಕ್ರಿಯಾ ಪುಸ್ತಕ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.