ಪುಸ್ತಕದ ಮುಖಬೆಲೆ - 280 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 252 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ಕುತೂಹಲಕಾರಿ ವಸ್ತುವುಳ್ಳ ಕಾದಂಬರಿ ಅಶೋಕ ಅವರ ’ಮುನಿ ಸಂಚಾರ’. ಆಯುರ್ವೇದ ಸಸ್ಯಗಳು ದೊರಕುವ ಅತೀಂದ್ರ ಬೆಟ್ಟ, ಈ ಬೆಟ್ಟದ ತಪ್ಪಲಿನಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ಆಯುಷ್ಮಾನ್ ಜನಾಂಗದವರು, ಅತೀಂದ್ರ ಬೆಟ್ಟದ ನಿಗೂಢತೆಯನ್ನು ಕಂಡು ಹಿಡಿಯಲು ಹೊರಟ ಯಾರೊಬ್ಬರೂ ಬದುಕಿ ಬಾರದೇ ಇರುವುದು, ಜ್ಞಾನಮೂರ್ತಿ ಎಂಬ ವಿಜ್ಞಾನಿ ಕೂಡಾ ಈ ಬೆಟ್ಟದ ನಿಗೂಢತೆಯನ್ನು ಕಂಡು ಹಿಡಿಯಲು ಬರುವುದು, ಅವನು ಸಾಯುವ ಮೊದಲು ಪತ್ತೇದಾರಿ ಚಿದಂಬರನಿಗೆ ಬರೆಯುವ ಪತ್ರ, ಜ್ಞಾನಮೂರ್ತಿಯ ಮಗ ಹರ್ಷ ತಂದೆಯ ಸಾವಿನ ಕಾರಣದೊಂದಿಗೆ ಅತೀಂದ್ರ ಬೆಟ್ಟದ ನಿಗೂಢತೆಯನ್ನು ಹುಡುಕಲು ಹೊರಡುವುದು... ಹೀಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಮುನಿಸಂಚಾರ ಕಾದಂಬರಿ ನಿಮ್ಮ ಓದಿಗೆ ಹೊಸ ಕಿಕ್ ಕೊಡುವಂತಿದೆ.
ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ.